
ಮಜೀವಿಯ ಬದುಕಿಗೆ ತೆರೆ: ಕೃಷಿಕನನ್ನು ಬಲಿತೆಗೆದುಕೊಂಡ ಕೃಷಿ ಯಂತ್ರ
News Details
ಶ್ರಮಜೀವಿಯ ಬದುಕು ಬವಣೆ: ಕೃಷಿಕನನ್ನು ಕೊಂದ ಕೃಷಿ ಯಂತ್ರ!
ಬನವಾಸಿ ಗೋಣೆಕಟ್ಟಾ ಗುರುನಗರದ ಚಂದ್ರಶೇಖರ ನಾಯ್ಕ ಅವರು ಪವರ್ ಟಿಲ್ಲರ್ ನಡುವೆ ಸಿಲುಕಿ ಸಾವನಪ್ಪಿದ್ದಾರೆ.
40 ವರ್ಷದ ಚಂದ್ರಶೇಖರ ನಾಯ್ಕ ಅವರು ಕೃಷಿಕರಾಗಿದ್ದರು. ತೋಟಕ್ಕೆ ಸೊಪ್ಪು ತರುವುದಕ್ಕಾಗಿ ಅವರು ಏಪ್ರಿಲ್ 30ರಂದು ಕಾಡಿಗೆ ಹೋಗಿದ್ದರು. ಅವರ ಜೊತೆ ಅನಿತಾ ಎಂಬಾತರು ಇದ್ದರು. ಸೊಪ್ಪು ತರುವಾಗ ಟಿಲ್ಲರಿನ ಕಬ್ಬಿಣದ ರಾಡು ಮರಕ್ಕೆ ಗುದ್ದಿದ್ದು, ಅದರ ನಡುವೆ ಚಂದ್ರಶೇಖರ ನಾಯ್ಕರು ಸಿಕ್ಕಿಬಿದ್ದರು.
ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದ ಚಂದ್ರಶೇಖರ್ ಅವರನ್ನು ಅನಿತಾ ಅವರು ರಕ್ಷಿಸಲು ಪ್ರಯತ್ನಿಸಿದರು. ಸಾಧ್ಯವಾಗದೇ ಇದ್ದಾಗ ದೊಡ್ಡದಾಗಿ ಬೊಬ್ಬೆ ಹೊಡೆದರು. ಆಕ್ರಂದನ ಕೇಳಿ ಚಂದ್ರಶೇಖರ ಅವರ ಅಣ್ಣ ಅರವಿಂದ ನಾಯ್ಕರು ಅಲ್ಲಿಗೆ ಓಡಿದರು. ಟಿಲ್ಲರನ್ನು ಅಲ್ಲಿಂದ ತೆಗೆದು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಚಂದ್ರಶೇಖರ ಅವರನ್ನು ಹೊರಗೆ ಎಳೆದರು.
ಅಸ್ವಸ್ಥಗೊಂಡ ಚಂದ್ರಶೇಖರ ನಾಯ್ಕರನ್ನು ಶಿರಸಿ ಪಿಜಿ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಚಂದ್ರಶೇಖರ ನಾಯ್ಕರ ಸಾವನ್ನು ವೈದ್ಯರು ಖಚಿತಪಡಿಸಿದರು.