
0:00:00
2025-04-19
ಯಲ್ಲಾಪುರದಲ್ಲಿ ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ ಪತ್ತೆ
News Details
ಯಲ್ಲಾಪುರದ ಕುಬೇರ್ ಹೊಟೇಲ್ ಅಂಚಿನಲ್ಲಿ ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ ನಡೆಯುತ್ತಿರುವುದನ್ನು ಪಿಎಸ್ಐ ಯಲ್ಲಾಲಿಂಗ ಕನ್ನೂರು ಪತ್ತೆ ಮಾಡಿದ್ದಾರೆ.
ತಾತ್ಕಾಲಿಕ ಶೆಡ್ ನಿರ್ಮಿಸಿ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಹುಲಿಮನೆಯ ಮಧುಕರ ನಾಯ್ಕ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಏಪ್ರಿಲ್ 17ರಂದು ಪಿಎಸ್ಐ ಯಲ್ಲಾಲಿಂಗ ಕನ್ನೂರು ಅವರು ತಮ್ಮ ತಂಡದೊoದಿಗೆ ಚಹಾ ಅಂಗಡಿ ಮೇಲೆ ದಾಳಿ ನಡೆಸಿದರು. ಅಲ್ಲಿ ಕಾನೂನುಬಾಹಿರವಾಗಿ ಅಕ್ರಮ ಮದ್ಯ ದಾಸ್ತಾನು ಮಾಡಿರುವುದನ್ನು ಅವರು ಪತ್ತೆ ಮಾಡಿದರು. ಅಂಗಡಿಯ ತಾತ್ಕಾಲಿಕ ಶೆಡ್ ಒಳಗೆ ಮದ್ಯ ಸೇವನೆಗೆ ಅವಕಾಶ ಕೊಟ್ಟಿರುವುದಕ್ಕಾಗಿ ಮಧುಕರ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿದರು. ಜೊತೆಗೆ ಅಲ್ಲಿದ್ದ 160ರೂ ಹಣ, ಖಾಲಿ ಲೋಟ, 4 ಸರಾಯಿ ಪ್ಯಾಕೇಟ್ ಹಾಗೂ ನೀರಿನ ಬಾಟಲಿಗಳನ್ನು ವಶಕ್ಕೆಪಡೆದರು.