
0:00:00
2025-04-19
ಕುಮಟಾದ ಬಿಎಸ್ಎನ್ಎಲ್ ಟವರ್ ಬಳಿ ಮಟ್ಕಾ ಆಡಿಸುತ್ತಿದ್ದ ಗಣಪತಿ ಗೌಡ ಸೆರೆ
News Details
ಕುಮಟಾ ಮೂರೂರಿನ ಬಿಎಸ್ಎನ್ಎಲ್ ಟವರ್ ಕೆಳಗೆ ಗೂಡಂಗಡಿ ನಡೆಸುವ ಗಣಪತಿ ಗೌಡ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಪಿಎಸ್ಐ ಸಾವಿತ್ರಿ ನಾಯಕ ಅವರು ಗಣಪತಿ ಗೌಡರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.
ಮೂರುರು ಹಟ್ಟಿಕೇರಿಯ ಗಣಪತಿ ಗೌಡ ಅವರು ಬಿಎಸ್ಎನ್ಎಲ್ ಟವರ್ ಕೆಳಗೆ ಗೂಡಂಗಡಿ ಹೊಂದಿದ್ದರು. ಅಲ್ಲಿಯೇ ಅವರು ಮಟ್ಕಾ ಆಡಿಸಿ ಇನ್ನಷ್ಟು ಹಣ ಸಂಪಾದಿಸುತ್ತಿದ್ದರು. ಕಾನೂನುಬಾಹಿರ ಆಟ ಆಡಿಸಿದ ಕಾರಣ ಅವರಿಗೆ ಕಮಿಷನ್ ಸಿಗುತ್ತಿದ್ದು, 1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣ ಪಡೆಯುತ್ತಿದ್ದರು.
ಈ ವಿಷಯ ಅರಿತ ಪಿಎಸ್ಐ ಸಾವಿತ್ರಿ ನಾಯಕ ಏಪ್ರಿಲ್ 16ರ ಸಂಜೆ ಗೂಡಂಗಡಿ ಮೇಲೆ ದಾಳಿ ನಡೆಸಿದರು. ಆ ವೇಳೆ ಗಣಪತಿ ಗೌಡ ಅವರು ಸಂಗ್ರಹಿಸಿದ್ದ 740ರೂ ಹಣ ಹಾಗೂ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದರು. ಅದಾದ ನಂತರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.