Loading...
  • aksharakrantinagarajnaik@gmail.com
  • +91 8073197439
Total Visitors: 854
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-18

ಉತ್ತರ ಕನ್ನಡದಲ್ಲಿ 3 ದಿನದಲ್ಲಿ 3 ಮಕ್ಕಳು ನೀರುಪಾಲು

News Details

ಕಳೆದ ಮೂರು ದಿನದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂವರು ಮಕ್ಕಳು ನೀರಿಗೆ ಬಿದ್ದು ಸಾವನಪ್ಪಿದ್ದಾರೆ. ಕಾರವಾರ, ಹಳಿಯಾಳ ಹಾಗೂ ಮುಂಡಗೋಡಿನಲ್ಲಿ ಮಕ್ಕಳ ಸಾವಾಗಿದೆ.

ಕಾರವಾರದ ಬಸುಣಗಾ ಗ್ರಾಮದಲ್ಲಿ ರೂಪಾನಂದ (14) ಎಂಬಾತರು ಕಾಳಿ ನದಿಗೆ ಬಿದ್ದಿದ್ದಾರೆ. ಗುರುವಾರ ಅವರ ಶವ ಸಿಕ್ಕಿದೆ. ಕಟ್ಟಡಕ್ಕೆ ನೀರು ಹಾಕುವುದಕ್ಕಾಗಿ ರೂಪಾನಂದ ಅವರು ಕೊಡ ಹಿಡಿದು ನದಿ ಬಳಿ ತೆರಳಿದ್ದರು. ಕಾಲು ಜಾರಿ ನದಿಗೆ ಬಿದ್ದಿದ್ದರಿಂದ ಅವರು ಸಾವನಪ್ಪಿದರು.

ಹಳಿಯಾಳದ ಬೆಳವಟಗಿ ಗ್ರಾಮದಲ್ಲಿ ಕಾಳಗಿನಕೊಪ್ಪದ ಮಂಜು ದೇವರಮನಿ (17) ನೀರಿಗೆ ಬಿದ್ದು ಕೊನೆ ಉಸಿರೆಳೆದಿದ್ದಾರೆ. ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದು, ಇದಕ್ಕಾಗಿ ಸಂಬAಧಿಕರ ಮನೆಗೆ ಬಂದಿದ್ದ ಮಂಜು ದೇವರಮನಿ ಈಜಲು ಕೆರೆಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ 3 ಗಂಟೆ ಅವಧಿಗೆ ಅವರು ಕೆರೆ ನೀರಿನಲ್ಲಿ ಮುಳುಗಿದರು. ಪೊಲೀಸರು ಶವ ಮೇಲೆತ್ತಿದರು.

ಮುಂಡಗೋಡಿನ ಗುಂಜಾವತಿಯಲ್ಲಿಯೂ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ನೀರಿಗೆ ಬಿದ್ದಿದೆ. ಮನೆ ಎದುರಿನ ತೊಟ್ಟಿಗೆ ಬಿದ್ದ ಎರಡುವರೆ ವರ್ಷದ ಮಗು ಅಲ್ಲಿಯೇ ಅಸುನಿಗಿದೆ. ವಿನಯ ಕುಂಬಾರ್ ಎಂಬ ಮಗು ನೀರಿಗೆ ಬಿದ್ದಿರುವುದನ್ನು ಗಮನಿಸಿದ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆತಂದರು. ಆದರೆ, ಪ್ರಯೋಜನವಾಗಲಿಲ್ಲ.