Loading...
  • aksharakrantinagarajnaik@gmail.com
  • +91 8073197439
Total Visitors: 854
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-18

ಕುಮಟಾ: ಹಾಲು ವಾಹನದಲ್ಲಿ ಜಾನುವಾರು ಸಾಗಾಟ – ಉಸಿರುಗಟ್ಟಿ 5 ಜಾನುವಾರು ಸಾವು

News Details

ಹಾಲು ಸಾಗಾಟದ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದದನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ. ಹಾಲು ಸಾಗಾಟ ವಾಹನ ತಡೆದಾಗ ಕಂಟೇನರ್ ಒಳಗೆ ಉಸಿರುಗಟ್ಟಿ 5 ಜಾನುವಾರು ಸಾವನಪ್ಪಿರುವುದು ಗೊತ್ತಾಗಿದೆ.

ಗುರುವಾರ ಮಧ್ಯಾಹ್ನ ಹೊಳೆಗದ್ದೆ ಟೋಲ್ ಗೇಟ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಂಟೇನರ್'ಗೆ ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ಕೈ ಮಾಡಿದರು. ಪೊಲೀಸರನ್ನು ಕಂಡ ತಕ್ಷಣ ಆ ಕಂಟೇನರಿನಲ್ಲಿದ್ದ ಐವರು ಓಡಿ ಪರಾರಿಯಾದರು. ತಕ್ಷಣ ಪೊಲೀಸರು ಚಾಲಕ ಅನ್ಸಾರಿ ಮಹಮ್ಮದ ಸಲ್ಮಾನ್'ರನ್ನು ವಶಕ್ಕೆಪಡೆದರು.

ಕಂಟೇನರ್ ಬಾಗಿಲು ತೆರೆದು ನೋಡಿದಾಗ ಅಲ್ಲಿ 14 ಜಾನುವಾರುಗಳಿದ್ದವು. ಆ ಪೈಕಿ ಐದು ಜಾನುವಾರುಗಳು ಉಸಿರುಗಟ್ಟಿ ಸಾವನಪ್ಪಿದ್ದವು. ಸಿಕ್ಕಿಬಿದ್ದ ಮಹಾರಾಷ್ಟçದ ಅನ್ಸಾರಿ ಮಹಮ್ಮದ ಸಲ್ಮಾನ್ ವಿಚಾರಿಸಿದಾಗ ಓಡಿ ಹೋದವರ ಹೆಸರು ಬಾಯ್ಬಿಟ್ಟರು. ಮಹಾರಾಷ್ಟಾçದ ಸಮೀರ್ ಸೇಟ್, ಜಾವೇದ ಮುಲ್ಲಾ ಹಾಗೂ ಭಟ್ಕಳದ ಹನಿಪಾದ್ ನಿವಾಸಿ ಅಶೀಪ್ ಕೋಲಾ, ಅಜಾದನಗರದ ಅಪ್ಬಲ್ ಖಾಸಿಂಜಿ ಓಡಿಹೋದವರು ಎಂಬುದು ತಿಳಿಯಿತು.

ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆಪಡೆದ ಪೊಲೀಸರು ಓಡಿ ಹೋದವರ ಜೊತೆ ಸಿಕ್ಕಿಬಿದ್ದವನ ವಿರುದ್ಧವೂ ಪ್ರಕರಣ ದಾಖಲಿಸಿದರು. ಪಿಎಸ್‌ಐ ಮಂಜುನಾಥ ಗೌಡರ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.